ಬೆಳಕಿನ ಹಣತೆ

ಅಂತರಾಳದ ಮಾತುಗಳ
ದನಿಯಾಗುವವರ ಹುಡುಕುತ್ತ
ಬೆಳಕಿಗಾಗಿ ಚಡಪಡಿಸುತ್ತ
ಅರಸುತ್ತಿದ್ದೇವೆ ಜೀವಗಳ ತಡವರಿಸುತ್ತಾ.

ಒಡಲು ಬಿಚ್ಚಿ ಹೂವು ಹಸಿರು
ಚಿಮ್ಮಿ ಚೆಲ್ಲುತ್ತ ಜೀವ ತೇಯುವ
ಸುಡುವ ಸೂರ್ಯನ ಬೆಳಕಲ್ಲಿ
ಕಾಯುತ್ತಿದ್ದೇವೆ ಮಿಡಿಯುವ ಮರ್ಮರಗಳ

ನಡೆಯುತ್ತಿದ್ದೇವೆ ಬಿರಬಿರನೆ
ತಂಪನ್ನು ಅರಸುತ್ತ ಒಡಲ ಉರಿಗೆ
ಸುರಿವ ಮೋಡಗಳ ಜೀವ ಪಲ್ಲಟಗಳ
ಒಳಗೊಳಗೆ ಕಂಪಿಸುವ ಆತ್ಮಗಳ ಚಲಿಸುತ್ತ.

ಕರುಣೆ ಬಸಿದು ಒಡಲೊಳಗೆ
ಅನ್ಯಕ್ಕೆ ಭಾವಗಳ ಸಂತೆ ಜಾತ್ರೆಗಳು
ಅವರಿವರು ಹುಡುಕುವ ನೆಮ್ಮದಿ
ಜೀವಂತ ಭಾವಗಳ ಮೆರವಣಿಗೆಯಲಿ

ಎಲ್ಲ ಜಗದ ಬೆಳಗಿದ ರವಿ
ಮಾಂತ್ರಿಕ ಕೈ ಸೇರಬೇಕು ಕನಸುಗಳು
ಕತ್ತಲೆಯಲ್ಲಿ ಉರಿಯುವ ಬೆಳಕಿನ ಹಣತೆ
ದಾಟಿ ಬಿಡುವ ಬದುಕಿನ ಎಲ್ಲಾ ಹಾಯಿಗಳ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಮ್ಮೊಮ್ಮೆ ಎನಿಸುವುದು!
Next post ಅಂತರಾಳ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys